ಮುಂಜಾನೆ ಕನಸಿನಲ್ಲಿ ಕಾಡಿಹೋದ
ಮನಸಿನ ಗಾಯ ಹಸಿರು
ನಾ ನಿನ್ನ ನೆನಪಲ್ಲೇ ಕಳೆದುಹೋದೆ
ಒಮ್ಮೆ ಹೇಳಿ ಹೋಗು ಎನ್ನಾ ಹೆಸರು
ನಿನ್ನ ಪ್ರೀತಿಯ ಕಡಲಿಗಾಗಿ ಹಾತೊರೆಯುವ
ಅಲೆಮಾರಿ ದೋಣಿ ನಾನು
ಕಿರುನಗೆಯ ತಂಗಾಳಿ ಅಲೆಯ ಬೀಸಿ
ಮನಸಿನ ದಾರಿ ತೋರು
ಏಕಾಂತದಿ ನಿನ್ನ ನೆನೆದಾಗೆಲ್ಲಾ
ಮನದಲಿ ಆಸೆಗಳು ನೂರೊಂದು
ಸಾಕಿನ್ನು ಈ ಕಣ್ಣಾಮುಚ್ಚಾಲೆಯು
ನನಸು ಮಾಡು ನೀ ಬಂದು
ನಿನ್ನ ನಗೆಯ ಹಾವಳಿ
ಎನ್ನೆದೆಗೂ ಆಗಲಿ
ನಿನ್ನ ಕಣ್ಣ್ಮುಂದೆ ಅಲೆಯುವೆನು
ಬಳಿ ಎನ್ನೆಡೆಗೆ ಸೆಳೆಯುವೆನು
ನಿನ್ನ ಮನಸಲ್ಲೆ ನೆಲೆಸುವೆನು
ನಿನ್ನ ಕನಸನ್ನು ಕದಿಯುವೆನು
ಸೂ : ಜಯಂತ್ ಕಾಯ್ಕಿಣಿರವರ ಈ ಹಾಡಿಂದ ಪ್ರೇರೇಪಿತನಾಗಿ ಬರೆದದ್ದು
Dattatreya
ಡಿಸೆ 27, 2011 @ 03:38:37
awesome guru !! 🙂
esp.. the last two paragraphs 🙂 .. sakkat guru 🙂
Srikanth
ಡಿಸೆ 27, 2011 @ 04:39:09
Thanks Datta 🙂
Keerthy
ಫೆಬ್ರ 07, 2012 @ 17:19:44
Srikanth,
First of all Beautifully written poem. The questions asked are very innocent and true. I hope those are answered soon…. I had my own opinions on your questions 🙂
ಮುಂಜಾವಿನ ಕನಸು ನನಸಾಗುವುದು ಎನ್ನುವರು
ನಿನ್ನಾಕೆಯ ಪ್ರತಿ ಉಸಿರಲು ಇರಲಿ ನಿನ್ನ ಹೆಸರು
ಸ್ನೇಹದ ಕಡಲಲ್ಲಿ ಅಲೆಯುತಿರುವ ದೋಣಿ ನೀ
ಪ್ರೀತಿ ದಡವ ಸೇರು…ದಿಗಂತದಾಚೆಗು ಕೇಳಲಿ ಮಿಲನದ ಮಾರ್ಧನಿ
ಅವಳ ನೆನಹು ಜೊತೆಯಲಿರುವಾಗ ಮತ್ತೆಲ್ಲಿಯ ಏಕಾಂತ?
ಕಣ್ಣಾಮುಚ್ಚಾಲೆ ಆಟವಲ್ಲ!! ಇದು ಕಾಯುವ ಪಾಠ ಓ ಮುಗ್ಧ ಪ್ರೀತಿ ಸಂತ 🙂
ಆತುರ ಕಾತುರ ತಳಮಳ ಗೊಂದಲ ಇವೆಲ್ಲಕ್ಕೂ ಒಂದೇ ಉತ್ತರ…
ನೈಜ ಭಾವನೆಗಳೆಂದೂ ಅಳಿಯೆವು ತಾಳ್ಮೆಯೇ ಅನುಬಂಧದ ಎತ್ತರ….